ಅಕ್ಕ ಮಹಾದೇವಿ ವಚನಗಳು ೬

ಕಾಮ ಬಲ್ಲಿದನೆಂದರೆ ಉರುಹಿ ಭಸ್ಮವ ಮಾಡಿದ! ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ! ಬ್ರಹ್ಮ ಬಲ್ಲಿದನೆಂದರೆ ಶಿರವ ಚಿವುಟಿಯಾಡಿದ! ಎಲೆ ಅವ್ವ, ನೀನು ಕೇಳಾ ತಾಯೆ, ವಿಷ್ಣು ಬಲ್ಲಿದನೆಂದರೆ ಮುರಿದು ಕಂಕಾಳವ ಪಿಡಿದ! ತ್ರಿಪುರದ ಕೋಟೆ ಬಲ್ಲಿತ್ತೆಂದರೆ ನೊಸಲ ಕಣ್ಣಿಂದುರುಹಿದನವ್ವ! ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ! ಜನನಮರಣಕ್ಕೊಳಗಾಗದವನ ಬಲುಹನೇನ ಬಣ್ಣಿಪೆನವ್ವ!?