ಬಸವಣ್ಣ ವಚನ ೧೦

ಆಸತ್ತೆನಲಸಿದೆನೆಂದರೆ ಮಾಣದು, ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು, ಏವೆನೇವೆನೆಂದರೆ ಮಾಣದು- ಕಾಯದ ಕರ್ಮದ ಫಲಭೋಗವು. ಕೂಡಲಸಂಗನ ಶರಣರು ಬಂದು 'ಹೋ ಹೋ ಅಂಜದಿರಂಜದಿರು' ಎಂದರಾನು ಬದುಕುವೆನು.